೨೦೧೨ರ ಕ್ಯಾಲೆಂಡರ್ ಬಿಡುಗಡೆ




ತುಂಗಾ ತರಂಗ ದಿನಪತ್ರಿಕೆಯ ೨೦೧೨ ರ ಕ್ಯಾಲೆಂಡರ್‌ನ್ನು ಇಂದು (೨೬-೧೨-೨೦೧೧೦ ಬೆಳಿಗ್ಗೆ ಕಛೇರಿ ಆವರಣದಲ್ಲಿ ನಗರಸಭಾಧ್ಯಕ್ಷ ಚನ್ನಬಸಪ್ಪ (ಚೆನ್ನಿ) ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶೃಂಗೇಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣಶೆಟ್ಟಿ, ಎಸ್.ಬಿ.ಐ. ಮುಖ್ಯ ಕಛೇರಿಯ ಪ್ರಧಾನ ವ್ಯವಸ್ಥಾಪಕ ಎಂ.ಎಸ್. ಶೆಣೈ, ಪತ್ರಿಕೆ ಸಂಪಾದಕ ಎಸ್ಕೆ. ಗಜೇಂದ್ರಸ್ವಾಮಿ,  ವ್ಯವಸ್ಥಾಪಕ ಸಂಪಾದಕ ಡಿ.ಬಿ. ವಿಜಯಕುಮಾರ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳು